ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

 ಆಪರೇಷನ್ ಹಸ್ತ ಮಾಡುವ ಅಗತ್ಯ ಕಾಂಗ್ರೆಸ್ ಗೆ ಇಲ್ಲ- ಸಚಿವ ದಿನೇಶ್ ಗುಂಡೂರಾವ್

ಮಂಗಳೂರು:  ಆಪರೇಷನ್ ಹಸ್ತ’ ಮಾಡುವ ಅವಶ್ಯಕತೆ ಕಾಂಗ್ರೆಸ್ ಗೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಈ ಕುರಿತು ಮಾತನಾಡಿದ ದಿನೇಶ್ ಗುಂಡೂರಾವ್, “ಕಾಂಗ್ರೆಸ್ ‘ಆಪರೇಷನ್ ಹಸ್ತಾ’ ಮಾಡುವ ಅಗತ್ಯವಿಲ್ಲ. ‘ಆಪರೇಷನ್ ಕಮಲ’ ಮೂಲಕ ಬಿಜೆಪಿ ರಾಜಕೀಯ ವ್ಯವಸ್ಥೆಯನ್ನು ಎಷ್ಟು ಹಾಳುಮಾಡಿದೆ ಎಂಬುದನ್ನು ದೇಶ ಸಾಕ್ಷಿಯಾಗಿದೆ. ನಮಗೆ ಇತರ ರಾಜಕೀಯ ಪಕ್ಷಗಳಿಂದ ನಾಯಕರ ಬೇಟೆಯಾಡುವ ಅಗತ್ಯವಿಲ್ಲ ಎಂದರು.

ಜೆಡಿಎಸ್ ನಿಂದ ಎಷ್ಟು ಮಂದಿ ಕಾಂಗ್ರೆಸ್ ಸೇರಲು ಆಯ್ಕೆ ಮಾಡಿಕೊಳ್ಳಬಹುದು ಎಂಬುದು ತಿಳಿದಿಲ್ಲ.ಅನೇಕರು ತಮ್ಮ ಪಕ್ಷದ ಪ್ರಸ್ತುತ ಒಳಜಗಳದಲ್ಲಿ ಅತೃಪ್ತರಾಗಿದ್ದಾರೆ ಎಂದು ಊಹಿಸಬಹುದಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಇಂತಹ ಬೆಳವಣಿಗೆಗಳು ಸಾಮಾನ್ಯವಾಗಿದೆ. ಆದರೆ ನಮಗೆ ಅಪರೇಷನ್ ಕಮಲದ ಅಗತ್ಯವಿಲ್ಲ. ಇನ್ನು ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಆತಂಕ ಉಂಟಾಗಿದೆ ಎಂದರು.

Related posts

ಶಕ್ತಿ ಯೋಜನೆಗೆ ನಿರ್ವಾಹಕರು ಪಲಿಪಶು: 300 ಕಂಡಕ್ಟರ್ ಗಳು ಸಸ್ಪಂಡ್

33 ನೇ ರಾಜ್ಯ ಮಟ್ಟದ ಸಂಸ್ಕತ ಭಾಷಣ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ.

ಜಾತಿ ಜನಗಣತಿ ವರದಿ  ಕೊಡುವ ಮುನ್ನವೇ ವಿರೋಧ ಏಕೆ..?  ಸಿಎಂ ಸಿದ್ದರಾಮಯ್ಯ ಪ್ರಶ್ನೆ.