ಶಿವಮೊಗ್ಗ: ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಗಿಗುಡ್ಡಕ್ಕೆ ಪ್ರವೇಶಿಸದಂತೆ ಇಂದು ಪೊಲೀಸರು ತಡೆ ಹಿಡಿದು ಅವರನ್ನು ದಾವಣಗೆರೆಗೆ ಕರೆದೊಯ್ದರು.
ರಾಗಿಗುಡ್ಡದಲ್ಲಿ ಈಗಾಗಲೇ 144 ಸೆಕ್ಷನ್ ನಿಷೇಧಾಜ್ಞೆ ಜಾರಿಯಲ್ಲಿದೆ. ಆದ್ದರಿಂದ ಪ್ರಮೋದ್ ಮುತಾಲಿಕ್ ಅವರು ಪ್ರಚೋದನಕಾರಿಯಾಗಿ ಭಾಷಣ ಮಾಡಬಹುದು ಎಂಬ ಮುನ್ನೆಚ್ಚರಿಕೆಯಿಂದ ಮುಂದಿನ ಮೂವತ್ತು ದಿನಗಳ ಕಾಲ ಶಿವಮೊಗ್ಗ ಪ್ರವೇಶಿದಂತೆ ನೋಟೀಸ್ ಜಾರಿ ಮಾಡಿದ್ದಾರೆ.