ಶಿವಮೊಗ್ಗ: ಶಿವಮೊಗ್ಗ ದಸರಾದ ಆಹಾರ ದಸರಾ 2023ರ ಅಂಗವಾಗಿ ಇಂದು ನಗರದ ಎಸ್. ನಿಜಲಿಂಗಪ್ಪ ಸಭಾಂಗಣದಲ್ಲಿ ಅಪ್ಪ ಮಗಳು ಅಡುಗೆ ಮಾಡುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಗೋಧಿರವೆ ಮತ್ತು ಫೇಣಿ ರವೆ ಉಪಯೋಗಿಸಿ ತಯಾರಿಸುವ ಖಾದ್ಯಗಳ ಸ್ಪರ್ಧೆಯಲ್ಲಿ ಉಪಮೇಯರ್ ಲಕ್ಷ್ಮಿ ಶಂಕರ್ ನಾಯಕ್ ಅವರ ಮಗಳು ಪೂಜಾ ಹಾಗೂ ಪತಿ ಶಂಕರ್ ನಾಯಕ್ ಕೂಡ ಭಾಗವಹಿಸಿದ್ದರು.
ಅರ್ಧ ಗಂಟೆಯ ಅವಧಿಯಲ್ಲಿ ಅಚ್ಚುಕಟ್ಟಾಗಿ ಮಗಳ ನಿರ್ದೇಶನದ ಮೇರೆಗೆ ಅಪ್ಪ ಅಡಿಗೆ ಮಾಡುವ ಈ ಸ್ಪರ್ಧೆಯಲ್ಲಿ ಹಲವಾರು ಸ್ಪರ್ಧಿಗಳು ಭಾಗವಹಿಸಿ ಅರ್ಧ ಗಂಟೆಯೊಳಗೆ ರುಚಿಕರ ಖಾದ್ಯಗಳನ್ನು ತಯಾರಿಸಿದರು.
ಆಹಾರ ದಸರಾ ಸಮಿತಿ ಅಧ್ಯಕ್ಷೆ ಆಶಾ ಚಂದ್ರಪ್ಪ, ಜ್ಞಾನೇಶ್ವರ್, ಆರತಿ ಆ.ಮಾ. ಪ್ರಕಾಶ್, ಯಮುನಾ ರಂಗೇಗೌಡ, ಕಲ್ಪನಾ ರಾಮು, ಮಂಜುಳಾ ಶಿವಣ್ಣ, ಭಾನುಮತಿ ವಿನೋದ್ ಶೇಟ್, ಸುರೇಖಾ ಮುರುಳೀಧರ್ ಮತ್ತಿತರರಿದ್ದರು.