ಶಿವಮೊಗ್ಗ: ವಿಶ್ವ ಅರಿವಳಿಕೆ ದಿನಾಚರಣೆ ಅಂಗವಾಗಿ ನಗರದ ಗೋಪಿ ವೃತ್ತದಲ್ಲಿ ಅರಿವಳಿಕೆ ತಜ್ಞರ ಸಂಘ ಶಿವಮೊಗ್ಗ ಶಾಖೆ ಮತ್ತು ಮ್ಯಾಕ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಅರಿವು ಮೂಡಿಸುವ ತುರ್ತು ಚಿಕಿತ್ಸೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾ! ನಾಗೇಂದ್ರ ಡಾಕ್ಟರ್ ಲತಾ ನಾಗೇಂದ್ರ. ವೈದ್ಯರಾದ ಡಾ. ಶಿವಕುಮಾರ್, ಡಾ. ಗುರುದತ್ತ, ಡಾಕ್ಟರ್ ಸಂಧ್ಯಾ ಡಾಕ್ಟರ್ ಚಂದ್ರಶೇಖರ್, ವೀಣಾ, ಡಾ. ಬಸವರಾಜ್, ಡಾ ಶ್ವೇತಾ ಮತ್ತಿತರರಿದ್ದರು