ಶಿವಮೊಗ್ಗ: ಕೆಪಿಸಿಸಿ ಉಪಾದ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿಯವರ ಹುಟ್ಟುಹಬ್ಬದ ಅಂಗವಾಗಿ ಶಿಕಾರಿಪುರ ಪಟ್ಟಣದ ಪುಷ್ಪ ಶಾಲೆಯ ಅನಾಥ ಮಕ್ಕಳಿಗೆ ಶಾಲೆ ಬ್ಯಾಗ್, ವಾಟರ್ ಬಾಟಲ್, ಬಿಸ್ಕೇಟ್ ಹಾಗೂ ಹಣ್ಣುಗಳನ್ನು ವಿತರಿಸಿಲಾಯಿತು.
ಈ ವೇಳೆ ಮಾತನಾಡಿದ ಪುರಸಭಾ ಸದಸ್ಯ ಹಾಗೂ ಉಳ್ಳಿ ಫೌಂಡೇಶನ್ ಅದ್ಯಕ್ಷರಾದ ಉಳ್ಳಿ ದರ್ಶನ್ ರವರು, ನಮ್ಮ ನಾಯಕರು, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿಯವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದು, ಸರಳ ಸಜ್ಜನ ವ್ಯಕ್ತಿತ್ವದವರಾದ ಅವರು, ಶಿಕ್ಷಣ ಪ್ರೇಮಿ ಹಾಗು ಯುವಕರ ಸ್ಪೂರ್ತಿ, ನನ್ನಂತ ಬಾಹಳಷ್ಟು ಯುವಕರಿಗೆ ಮಾರ್ಗದರ್ಶಕರಾಗಿ ಮುನ್ನಡೆಸಿದ್ದಾರೆ. ಆ ದೇವರು ಅವರಿಗೆ ಆಯುರ್-ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಶ್ರೀಧರ್ ಕರ್ಕಿ, ಸ.ನಾ ಮಂಜಪ್ಪ, ಸಂತೋಷ್ ಗುಡ್ಡಳ್ಳಿ, ರಾಜು ಉಡಗುಣೆ, ಸುಹಾಸ್, ಶರತ್, ಮುಂತಾದ ಮುಖಂಡರು ಪಾಲ್ಗೊಂಡಿದ್ದರು..