ಶಿವಮೊಗ್ಗ : ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಇವರ ನೇತೃತ್ವದಲ್ಲಿ ಜಿಲ್ಲಾ ಸಮಿತಿಯು ಜನಪದ ಕಲಾವಿದರ ಮಾಹಿತಿ ಸಂಗ್ರಹಿಸಲು ಯೋಜಿಸಿದೆ. ಕಲಾವಿದರು ಹೆಸರು, ಖಾಯಂ ವಿಳಾಸ, ಮೊಬೈಲ್ ಸಂಖ್ಯೆ, ಕಲಾವಿದರ ಭಾವಚಿತ್ರ, ಪ್ರದರ್ಶನ ನೀಡುವ ಕಲೆಯ ಹೆಸರು, ಹಾಡುಗಳ ಮಾಹಿತಿ, ಈ ವರೆಗೆ ಪಡೆದಿರುವ ಪ್ರಶಸ್ತಿಗಳು, ಸನ್ಮಾನ ಸೇರಿದಂತೆ ವಿಶೇಷ ಮಾಹಿತಿಗಳನ್ನು ಒದಗಿಸಲು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಕೋರಿದ್ದಾರೆ.
ಕಲಾವಿದರ ಮಾಹಿತಿ ಕಜಾಪ ವೆಬ್ ಸೈಟ್ ನಲ್ಲಿ ಮತ್ತು ಕಿರು ಪುಸ್ತಕ ಮಾದರಿಯಲ್ಲಿ ಹೊರತರಲಾಗುವುದು. ಹಿರಿಯ, ಕಿರಿಯ ಕಲಾವಿದರು ಸಂಪೂರ್ಣ ಮಾಹಿತಿ ತುರ್ತಾಗಿ ನೀಡಲು ಕೋರಲಾಗಿದೆ. ಮಾಹಿತಿಯನ್ನು ಡಿ. ಮಂಜುನಾಥ, ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಸಮಿತಿ, ಉಡುಗಿರಿನಿಲಯ, ಭಗೀರಥ ವೃತ್ತ ಹತ್ತಿರ, ವಿನೋಬನಗರ, ಶಿವಮೊಗ್ಗ. 9449559595 ಸಂರ್ಪಕಿಸಬಹುದಾಗಿದೆ.