ಬೆಂಗಳೂರು: ನವ ಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ರಾಜ್ಯದ ಹಿರಿಯ ಪತ್ರಕರ್ತ ಹಾಗೂ ಕಮ್ಯುನಿಸ್ಟ್ ನಾಯಕ ಸಿ.ಆರ್.ಕೃಷ್ಣರಾವ್(93) ಮಂಗಳವಾರ ಬೆಳಗಿನ ಜಾವ ನಿಧನರಾಗಿದರು.
ನಲವತ್ತರ ದಶಕದಲ್ಲಿ ವಿದ್ಯಾರ್ಥಿಯಾಗಿದ್ದಾಗ ಎಡಪಂಥೀಯ ಚಳವಳಿಯನ್ನು ಪ್ರವೇಶಿಸಿ ನಂತರ ” ಜನಶಕ್ತಿ” ಪತ್ರಿಕೆ ಸಂಪಾದಕತ್ವ ವಹಿಸಿದರು. ಅರವತ್ತರ ದಶಕದಲ್ಲಿ ತಮ್ಮದೇ ಚಲನಚಿತ್ರ ಸಾಪ್ತಾಹಿಕ ವನ್ನು ವಿ.ಎನ್.ಸುಬ್ಬರಾವ್ ಅವರ ಜೊತೆ ಸೇರಿ ಕೆಲ ವರ್ಷ ನಡೆಸಿದರು.
ನಂತರ ಮದ್ರಾಸಿನಿಂದ ಬರುತ್ತಿದ್ದ ‘ ಸೋವಿಯತ್ ದೇಶ’ ಪತ್ತಿಕೆಯಲ್ಲೂ ಕೆಲ ಕಾಲ ಸೇವೆ ಸಲ್ಲಿಸಿದರು. ನಂತರ ಬೆಂಗಳೂರಿನಲ್ಲಿ ನೆಲೆಸಿ ನವಕರ್ನಾಟಕ ಪ್ರಕಾಶನ ಸಂಸ್ಥೆಯಲ್ಲಿ ಕೊನೆಯುಸಿರು ಇರುವವರೆಗೂ ಸೇವೆ ಸಲ್ಲಿಸಿದರು.