ಬೆಂಗಳೂರು: ಇನ್ನ ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರ ಬೀಳಿಸೋಕಾ ಅಲ್ಲಿಗೆ ಹೋಗಿರೋದು. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನವರ ಮೇಲೆ ಐಟಿ, ಇಡಿ ಛೂ ಬಿಡ್ತಾರೆ. ನಮ್ಮ ಮೇಲೆ ಐಟಿ ಇಡಿ ಛೂ ಬಿಡ್ತಾರೆ ಅಂತಾ ಆಯ್ತು. ಜೆಡಿಎಸ್ ನವರು ಹೆದರಿಯೇ ಅಲ್ಲಿಗೆ ಹೋಗಿರಬೇಕು ಅನ್ಸುತ್ತೆ ಎಂದು ಲೇವಡಿ ಮಾಡಿದರು.