ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕುಡಿತದಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಬೆಳೆಯುತ್ತಿದ್ದರೂ ಜನಪ್ರತಿನಿಧಿಗಳು ಗಮನಿಸದಿರುವುದು ವಿಷಾದನೀಯ-ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

 ಸಾಣೇಹಳ್ಳಿ : ಇಂದಿನ ಪತ್ರಿಕೆಗಳಲ್ಲಿ ಅಬಕಾರಿ ಇಲಾಖೆಯ ಮತ್ತು ಅಬಕಾರಿ ಮಂತ್ರಿಗಳ ಹೊಸ ಅಜಂಡಾ ನೋಡಿ ತುಂಬಾ ವೇದನೆಯಾಯ್ತು. ಇವರಿಗೆ ಯಾರು ಬುದ್ಧಿ ಹೇಳಬೇಕು ಎನ್ನುವುದೇ ತಿಳಿಯದಾಗಿದೆ. ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿಸಿ ತಮ್ಮ ಅಧಿಕಾರವನ್ನು ಸ್ಥಿರಗೊಳಿಸಿಕೊಳ್ಳುವ ಸಂಚು ಇದರ ಹಿಂದಿದೆಯೇ? ಈಗಾಗಲೇ ಕುಡುಕರ ಹಾವಳಿ ಹೆಚ್ಚಾಗಿ ಸಂಪತ್ತು, ಆರೋಗ್ಯ, ಮರ್ಯಾದೆ, ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಪಾರ್ಥೇನಿಯಂನಂತೆ ಬೆಳೆಯುತ್ತಿರುವುದನ್ನು ಜನಪ್ರತಿನಿಧಿಗಳು ಗಮನಿಸದಿರುವುದು ವಿಷಾದನೀಯ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಜನರ ಆರೋಗ್ಯ, ಆರ್ಥಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ್ದು ಜನಪರ ನೇತಾರನ ಜವಾಬ್ದಾರಿ. ಕ್ಷಣಿಕ ಲಾಭಕ್ಕಾಗಿ ಎಲ್ಲ ಆದರ್ಶಗಳನ್ನು ಗಾಳಿಗೆ ತೂರುವ ನೇತಾರರು ಬುದ್ಧ, ಬಸವಣ್ಣ, ಟಿಪ್ಪು, ಗಾಂಧಿ ಮತ್ತಿತರ ದಾರ್ಶನಿಕರ ಚಿಂತನೆಗಳನ್ನು ಜಾರಿಗೆ ತರುವುದು ಯಾವಾಗ? ಮದ್ಯದ ದುಷ್ಪರಿಣಾಮ ಅನುಭವಿಸುತ್ತಿರುವ ಕುಟುಂಬದವರು ಮೌನವಹಿಸದೆ ಈಗಲಾದರೂ ಸರ್ಕಾರದ ಧೋರಣೆಯ ವಿರುದ್ಧ ಬಂಡೇಳುವ ಕಾರ್ಯವನ್ನು ಮಾಡಬೇಕು. ಸಮಾಜಮುಖಿ ಚಿಂತಕರು, ಸಾಮಾಜಿಕ ಕಳಕಳಿಯುಳ್ಳ ಸಂಘಟನೆಗಳು ಮುಖ್ಯವಾಗಿ ಮಠಾಧೀಶರು ಈಗಲಾದರೂ ಧÀ್ವನಿಯೆತ್ತಿ ತಮ್ಮ ತಮ್ಮ ವಲಯದಲ್ಲಿ ಹೋರಾಟ ಮಾಡುವ ಸಂಕಲ್ಪ ಸ್ವೀಕರಿಸಬೇಕು. ಪ್ರವಾಹದ ವಿರುದ್ಧ ಈಜುವುದು ಸುಲಭವಲ್ಲವೆಂದು ನಮಗೂ ಗೊತ್ತು. ಹಾಗಂತ ಅದನ್ನು ಸ್ವಾಗತಿಸಬೇಕು ಎಂದಲ್ಲ. ದೊಡ್ಡ ಅನಾಹುತ ಸಂಭವಿಸುವ ಮೊದಲೇ ಸರ್ಕಾರ ಎಚ್ಚೆತ್ತು ಸಾವಿರ ಮದ್ಯದಂಗಡಿಯ ಯೋಜನೆಯನ್ನು ಬಿಟ್ಟು ಜನರ ಆರ್ಥಿಕ, ನೈತಿಕ ಮೌಲ್ಯಗಳನ್ನು ಕಾಪಾಡುವ, ಆರೋಗ್ಯ ಭಾಗ್ಯ ಕರುಣಿಸುವ ಹೃದಯವಂತಿಕೆ ಮೆರೆಯಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪತ್ರಿಕಾ ಹೇಳಿಕೆ ನೀಡಿದರು.

Related posts

ಮಾಜಿ ಕಾರ್ಪೊರೇಟರ್, ಪತಿ, ​ಬಾಮೈದನ ಮನೆ ಮೇಲೆ ಐಟಿ ದಾಳಿ:  40 ಕೋಟಿ ರೂ.ಗೂ ಹೆಚ್ಚು ಹಣ ಪತ್ತೆ.

ಸೂರ್ಯನತ್ತ ಚಿಮ್ಮಿದ  ಆದಿತ್ಯ L-1: ಇಸ್ರೋದಿಂದ ಯಶಸ್ವಿ ಉಡಾವಣೆ.