ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹೃದಯ ದಿನ: ಸೆ.25ರಿಂದ ಸೆ.29ರವರೆಗೆ ಬಾನುಲಿ ಸರಣಿ ಕಾರ್ಯಕ್ರಮ.

ಶಿವಮೊಗ್ಗ : ರೇಡಿಯೋ ಶಿವಮೊಗ್ಗ ಹಾಗೂ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ವಿಶೇಷ ಬಾನುಲಿ ಸರಣಿ ಮಾತುಕತೆ ರೂಪುಗೊಂಡಿದೆ. ಈ ಸರಣಿ ಸೆ.25ರಿಂದ ಸೆ.29ರವರೆಗೆ ರೇಡಿಯೋ ಶಿವಮೊಗ್ಗದಲ್ಲಿ ಪ್ರತಿದಿನ ಬೆಳಗ್ಗೆ 9 ರಿಂದ 9:30ರವರೆಗೆ ಪ್ರಸಾರವಾಗಲಿದೆ.

ಸೆ. 29ರ ವಿಶ್ವ ಹೃದಯ ದಿನದ ಅಂಗವಾಗಿ ಈ ಸರಣಿ  ನಡೆಯುತ್ತಿದೆ. ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಶ್ರೀವತ್ಸ, ಡಾ. ಅಶ್ವಲ್, ಡಾ. ಶರತ್, ಡಾ. ಬಾಲಸುಬ್ರಮಣಿ, ಡಾ. ವಿಕ್ರಮ್ ಮಹತ್ವದ ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ. ಆರ್ ಜೆ ಅಶ್ವಿನಿ ಹಾಗೂ ಆರ್ ಜೆ ಅರ್ಪಿತಾ  ಇದನ್ನು ನಡೆಸಿಕೊಡಲಿದ್ದಾರೆ. ನಿಮ್ಮ ಹೃದಯದ ಆರೋಗ್ಯ, ಲಾಲನೆ, ಪಾಲನೆಯ ಬಗ್ಗೆ ಇದರಲ್ಲಿ ಮಾಹಿತಿ ದೊರೆಯಲಿದೆ.  ಹೃದಯದ ಅನಾರೋಗ್ಯ ಸಮಯದಲ್ಲಿ ಬೇಕಾಗುವ ಕಾಳಜಿಯ ಕುರಿತಾಗಿ ಕಾರ್ಯಕ್ರಮ ಇರುತ್ತದೆ.

ರೇಡಿಯೋ ಶಿವಮೊಗ್ಗವು ಸಾಮಾನ್ಯ ರೇಡಿಯೋಗಳ ಜೊತೆಗೆ, ಮೊಬೈಲ್ ನಲ್ಲಿರುವ ಇನ್ ಬಿಲ್ಟ್ ಎಫ್ ಎಂ ಗಳಲ್ಲಿ ಪ್ರಸಾರವಾಗಲಿದೆ. ಇದರ ಜೊತೆಗೆ ಸ್ವಂತದ್ದೇ ಆಪ್ ಸಹಾ ಹೊಂದಿದ್ದು, ಅದನ್ನು ಗೂಗಲ್ ಪ್ಲೇಸ್ಟೋರ್ ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ( ಮೊ: 72591 76279) ಸಂಪರ್ಕಿಸಬಹುದು. ಆಸಕ್ತರು ಕಾರ್ಯಕ್ರಮವನ್ನು ಆಲಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ   ಎಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿದ್ದಾರೆ.

Related posts

18ನೇ ರಾಷ್ಟ್ರೀಯ  ಮಟ್ಟದ ಕರಾಟೆ ಪಂದ್ಯಾವಳಿ: ಪದಕಗಳನ್ನು ಗೆದ್ಧ ಕ್ರೀಡಾಪಟುಗಳಿಗೆ ಅಭಿನಂದನೆ.

ರಾಜ್ಯದಲ್ಲಿ ಎನ್ ಇಪಿಗೆ ಕೋಕ್: ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿ ಆದೇಶಿಸಿದ ರಾಜ್ಯ ಸರ್ಕಾರ

ರಾಜ್ಯದ ವಿದ್ಯುತ್‌ ಉತ್ಪಾದನೆ ಸ್ಥಾಪಿತ ಸಾಮರ್ಥ್ಯಕ್ಕಿಂತ ಕುಸಿತ -ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ  ತರಾಟೆ