ಶಿವಮೊಗ್ಗ: ಮಹಿಳಾ ಮೀಸಲಾತಿ ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವುದು ಸ್ವಾಗತಾರ್ಹ. ಆದರೆ, ಈ ಮಸೂದೆಯನ್ನು ತಕ್ಷಣದಿಂದಲೇ ಜಾರಿ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕುಮಾರಿ ಹೇಳಿದ್ದಾರೆ.
ಮಹಿಳಾ ಮೀಸಲಾತಿ ಜಾರಿ ಮಹಿಳೆಯರ ಸ್ವಾಭಿಮಾನದ ಪ್ರತೀಕವಾಗಿದೆ. ಲೋಕಸಭೆಯಲ್ಲಿ ಹಲವು ಬಾರಿ ಮಂಡಿಸಿದರೂ ಯಶಸ್ವಿಯಾಗಿರಲಿಲ್ಲ. ಈಗ ಎಲ್ಲಾ ಪಕ್ಷಗಳ ಒಪ್ಪಿಗೆಯಿಂದ ಈ ಮಸೂದೆ ಅನುಮೋದನೆ ಪಡೆದುಕೊಂಡಿದೆ. ಆದರೆ, ಈ ಮಸೂದೆ ತಕ್ಷಣದಿಂದಲೇ ಜಾರಿಯಾಗಬೇಕು. ಕೇಂದ್ರ ಸರ್ಕಾರ ಜನಗಣತಿಯ ನಂತರ ಜಾರಿ ಮಾಡುವುದಾಗಿ ಹೇಳಿದೆ. ಅಂದರೆ 2029ರಲ್ಲಿ ಜಾರಿಗೆ ಬರುತ್ತದೆ. ಹಾಗೆ ಮಾಡಬಾರದು. ಕೇಂದ್ರ ಸರ್ಕಾರ ಇದನ್ನು ರಾಜಕಾರಣಕ್ಕೆ ಅಥವಾ ಚುನಾವಣೆಯ ಗಿಮಿಕ್ ಮಾಡಬಾರದು ಎಂದು ಅವರು ತಿಳಿಸಿದ್ದಾರೆ.
ಈ ಮೀಸಲಾತಿಯಲ್ಲಿ ಒಬಿಸಿ, ಮುಸ್ಲಿಮರಿಗೆ ಒಳ ಮೀಸಲು ನೀಡಬೇಕು ಎಂಬುದು ಪ್ರತಿಪಕ್ಷಗಳ ಆಗ್ರಹವಾಗಿದೆ. ಆದರೆ, ಜನಗಣತಿಗೂ ಮುನ್ನ ಮಹಿಳಾ ಮೀಸಲು ಜಾರಿ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗಾದರೆ ಈ ವಿಶೇಷ ಅಧಿವೇಶನ ಕರೆಯುವ ಅವಶ್ಯಕತೆಯಾದರೂ ಏನಿತ್ತು? ಹಾಗಾಗಿ ತಕ್ಷಣವೇ ಮಸೂದೆ ಜಾರಿಯಾಗಬೇಕು. ಜನಗಣತಿ ನಂತರ ಎಸ್.ಸಿ., ಎಸ್.ಟಿ., ಒಬಿಸಿ ಮಹಿಳೆಯರ ಮೀಸಲಾತಿಗೆ ಅವಕಾಶ ಕೊಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
previous post