ಶಿವಮೊಗ್ಗ: ಇತ್ತೀಚೆಗೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗ ನಗರದ ಜಿ.ಕೆ. ಶಾಲೆಯ ವಿದ್ಯಾರ್ಥಿ ಹಾಗೂ ಬೊಮ್ಮನಕಟ್ಟೆ ಕರಾಟೆ ತರಬೇತಿ ಕೇಂದ್ರದ ಕೋಚ್ ಮೌಲ ರವರ ವಿದ್ಯಾರ್ಥಿ ಸೈಯದ್ ಕಲಿಮ್ ಉಲ್ಲಾ ಕಟಾ ಮತ್ತು ಕುಮತಿ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದಿದ್ದು, ಈ ಸಂದರ್ಭದಲ್ಲಿ ಕೋಚ್ ಸನ್ಸೈ ಮೌಲ ಉಪಸ್ಥಿತರಿದ್ದು, ವಿಜೇತ ಕ್ರೀಡಾಪಟುವಿಗೆ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಹಾಗೂ ಬೊಮ್ಮನಕಟ್ಟೆ ಕರಾಟೆ ತರಬೇತಿ ಶಾಖೆಯ ಆಡಳಿತ ನಿರ್ವಾಹಕ ರಮೇಶ್ ಅಭಿನಂದಿಸಿದ್ದಾರೆ