ಬೆಂಗಳೂರು: ಕೇವಲ ಸಣ್ಣ ಪುಟ್ಟ ನಾಯಕರಲ್ಲ, ದೊಡ್ಡ ದೊಡ್ಡ ಲೀಡರ್ ಗಳೇ ಕಾಂಗ್ರೆಸ್ ಗೆ ಬರುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ನುಡಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಬಿಜೆಪಿಯ ದೊಡ್ಡ ದೊಡ್ಡ ನಾಯಕರೇ ಕಾಂಗ್ರೆಸ್ ಗೆ ಬರ್ತಾರೆ. ನಾವೇನು ಅಪರೇಷನ್ ಮಾಡುತ್ತಿಲ್ಲ ಅವರಾಗಿಯೇ ಕಾಂಗ್ರೆಸ್ ಗೆ ಬಂದರೇ ಬೇಡ ಎನ್ನಲು ಆಗುತ್ತಾ. ನಮ್ಮವರ ಹಿತಾಸಕ್ತಿ ಕಾಪಾಡಿಕೊಂಡೇ ಎಲ್ಲಾ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿ ಮುಳುಗುತ್ತಿರುವ ಹಡಗಲ್ಲ. ಮುಳುಗಿರುವ ಹಡಗು ಯಾರು ಕೂಡ ಈಗ ಬಿಜೆಪಿಯಲ್ಲಿ ಇರಲು ಇಷ್ಟಪಡುವುದಿಲ್ಲ ರಾಜ್ಯ ಬಿಜೆಪಿ ನಾಯಕರ ಮೇಲೆ ವರಿಷ್ಠರ ವಕ್ರದೃಷ್ಠಿ ಬಿದ್ದಿದೆ . ಮೋದಿ ಮೊನ್ನ ಬಿಜೆಪಿ ನಾಯಕರ ಮುಖ ನೋಡಲಿಲ್ಲ ಮರ್ಯಾದೆ ಉಳಿಸಿಕೊಳ್ಳುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಬ್ಯಾರಿಕೇಡ್ ಹಿಂದೆ ನಿಂತಿದ್ದರು ಎಂದು ಎಂ.ಪಿ ಪಾಟೀಲ್ ಲೇವಡಿ ಮಾಡಿದರು.