ಶಿವಮೊಗ್ಗ: ಮಹಾನಗರ ಪಾಲಿಕೆ ಸದಸ್ಯರು, ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಚುನಾವಣೆಯ ಪರಾಜಿತ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಪಾಲಿಕೆ ಆವರಣದಲ್ಲಿ ಅಭಿಮಾನಿಗಳಿಂದ ನಂದಿಗೆ ಪೂಜೆ ಮಾಡಿ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಅದ್ಧೂರಿಯಾಗಿ ಆಚರಿಸಲಾಯಿತು. ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳು ಹಣ್ಣು ವಿತರಣೆ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪ್ರಮುಖರಾದ ಬಾಲಾಜಿ, ಮಧು, ಶರತ್, ವಿನಯ್ ತಾಂಡ್ಲೆ, ಶಿವಕುಮಾರ್, ಅಲ್ತಾಫ್ ಪರ್ವೀಜ್, ರಾಘವೇಂದ್ರ, ಕವಿತಾ, ಗಂಗಾಧರ್, ಸುಮತಿ ಕರ್ಕಡ, ಸುವರ್ಣಾ ನಾಗರಾಜ್, ಸವಿತಾ ಮತ್ತಿತರರಿದ್ದರು.