ಶಿವಮೊಗ್ಗ: ಶಿವಮೊಗ್ಗ: ಆ.30ರಿಂದ ಪ್ರಾರಂಭವಾಗುವ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಸಂಭವನೀಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ವಿಷಯವಾರು ಅಂತರವನ್ನು ಹೆಚ್ಚಿಸಬೇಕು ಎಂದು ಎನ್ಎಸ್ಯುಐ ಘಟಕದ ವತಿಯಿಂದ ಇಂದು ಪರೀಕ್ಷಾಂಗ ಉಪ ಕುಲಸಚಿವ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪದವಿ ಪಠ್ಯ ಅಂಶವನ್ನು ಒಂದು ದಿನದಲ್ಲಿ ಪುನರಾವರ್ತನೆ ಮಾಡುವುದು ವಿದ್ಯಾರ್ಥಿಗಳಿಗೆ ಕಷ್ಟಸಾಧ್ಯ ವಾಗಿದೆ. ಪರೀಕ್ಷೆಗಳ ವಿಷಯವಾರು ಅಂತರ ಕೇವಲ ಒಂದೇ ದಿನ ಇದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೂ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಕುವೆಂಪು ವಿವಿ ಈ ಅಂಶದ ಕುರಿತು ಗಮನವಹಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಅಂತರವನ್ನು ಎರಡು ಅಥವಾ ಮೂರು ದಿನಗಳ ಕಾಲಕ್ಕೆ ನಿಗದಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. .
ಈ ಸಂದರ್ಭದಲ್ಲಿ ವಿದ್ಯಾರ್ಥಿ ಗಳಾದ ಪ್ರೀತಂ ಗೌಡ ಬಿ.ಎಂ, ಕೀರ್ತಿ ನಾಯ್ಕ ಎನ್., ರಮೇಶ್ ಕೆ.ಟಿ., ಭೂಮಿಕ, ಯು. ಕಾವ್ಯ, ಪುಷ್ಟರಾಜ್ ಮುಂತಾದವರಿದ್ದರು.
previous post