ಶಿವಮೊಗ್ಗ: 2022-23ನೇ ಸಾಲಿನ ದೇವರಾಜ ಅರಸು ಪ್ರಶಸ್ತಿಯನ್ನು ಹಿರಿಯ ಸಮಾಜವಾದಿ ಮುಖಂಡರಾದ ಕಾಗೋಡು ತಿಮ್ಮಪ್ಪನವರಿಗೆ ನೀಡಲು ನಿರ್ಧರಿಸಿರುವ ಸರ್ಕಾರ ತೀರ್ಮಾನ ಸ್ವಾಗತಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟ್ ನ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗಳ ಎದುರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ವ್ಯವಸ್ಥಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಎಸ್.ವಿ. ರಾಜಮ್ಮ, ಹೆಚ್.ಎಂ. ಸಂಗಯ್ಯ, ಡಾ. ಕಲ್ಪನಾ, ಶಿವಣ್ಣ, ಪಿ.ಡಿ. ಮಂಜಪ್ಪ, ಹೆಚ್.ಎಸ್. ಪ್ರಸನ್ನಕುಮಾರ್, ಮಂಜುನಾಥ್, ಶಂಕ್ರಾ ನಾಯ್ಕ, ನರಸಿಂಹ ಮೂರ್ತಿ, ಜಿ.ವಿ. ಮಂಜುಳಾ ಇದ್ದರು.