ಶಿವಮೊಗ್ಗ: ಸ್ವಾತಂತ್ರೋತ್ಸವ ದಿನಾಚರಣೆ ಸುಸಂದರ್ಭದಲ್ಲಿ ಮಹಿಳಾ ಸಬಲೀಕರಣದ ದೈಯೋದ್ದೇಶದೊಂದಿಗೆ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ನಿಂದ ‘ಶಕ್ತಿ ಸೂಪರ್ ಸ್ತ್ರೀ’ (ಅದ್ಭುತ ಮಹಿಳೆ’ ) ಶೀರ್ಷಿಕೆ ಅಡಿಯಲ್ಲಿ ನಗರದ ಹರಿಗೆ ಬಡಾವಣೆಯ ಶ್ರೀ ಕಾಲಭೈರವೇಶ್ವರ ವೃದ್ಧಾಶ್ರಮದ ಆವರಣದಲ್ಲಿ ಮಹಿಳಾ ಪ್ರಮುಖರಾದ ಲಕ್ಷ್ಮಿ.ಕೆ, ಫರೀದಾ ಭಾನು,ರೇಣುಕಾ,ಲಕ್ಷ್ಮಿ,ಶೋಭಾ ರವರುಗಳು ಧ್ವಜಾರೋಹಣ ಮಾಡಿ “ಅದ್ಭುತ ಮಹಿಳೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದ ನೇತೃತ್ವವನ್ನು ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್ ವಹಿಸಿದ್ದರು
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಪದಾಧಿಕಾರಿಗಳಾದ ಎಸ್ ಕುಮಾರೇಶ್, ಎಮ್ ರಾಹುಲ್, ರಾಕೇಶ್, ಪವನ್, ಮೋಹನ್, ಸಂತೋಷ್ ಇನ್ಶಾಲ್ , ನರಸಿಂಹ, ಗೌತಮ್ ಹಾಗೂ ಯುವ ಕಾಂಗ್ರೆಸ್ ನ ಕಾರ್ಯಕರ್ತರು ಉಪಸ್ಥಿತರಿದ್ದರು