ಶಿವಮೊಗ್ಗ: ನಗರದ ಅಶ್ವತ್ಥ ನಗರ ಆಂಡಾಳ್ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಡೆದ ಶ್ರಾವಣ ಚಿಂತನ ಕಾರ್ಯಕ್ರಮದ ಉದ್ಧಾಟನೆಯನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಭಜನೆ, ಸಂಕೀರ್ತನಗಳ, ಶ್ಲೋಕಗಳ ದೇವರನ್ನು ಒಲಿಸಿಕೊಳ್ಳಬಹುದಾಗಿದೆ. ಅಧಿಕ ಮಾಸದಲ್ಲಿ ದೇವರ ನಾಮಸ್ಮರಣೆಯಿಂದ ಅಧಿಕ ಫಲ ಬರುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಆಧುನಿಕ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಆಧ್ಯಾತ್ಮದ ಒಲವು ಬೇಕೇಬೇಕು. ಮನಶ್ಯಾಂತಿ ಕೊರತೆ ಇರುವ ಈಗಿನ ಸಂದರ್ಭದಲ್ಲಿ ದೇವರ ನಾಮಸ್ಮರಣೆಯೊಂದೇ ಮನಶ್ಯಾಂತಿ ನೀಡುತ್ತದೆ ಎಂದರು.
ಈ ಸಂದರ್ಭಧಲಿ ಎಲ್.ಬಿ.ಎಸ್. ನಗರದ ನಿವಾಸಿಗಳ ಸಂಘದ ಅಧ್ಯಕ್ಷರಾದ ಪಂಚಾಕ್ಷರಿ, ಉದ್ಯಮಿ ಹರ್ಷ ಕಾಮತ್, ಕೃಷ್ಣಭಟ್, ಆರ್ಯವೈಶ್ಯ ಶ್ರೀ ರಾಮ ಸಹಕಾರ ಸಂಘದ ನಿರ್ದೇಶP ಎಸ್.ಎನ್. ಶ್ರೀನಾಗ್, ಲಲಿತಾ ಹಾಗೂ ನಿವಾಸಿಗಳ ಮಹಿಳಾ ಭಜನಾ ಸಂಘದ ಸದಸ್ಯರು ಉಪಸ್ಥಿತರಿದ್ದರು
previous post