ಶಿವಮೊಗ್ಗ: ನಗರದ ಪ್ರತಿಷ್ಟಿತ ಡಯಾನ ಬುಕ್ ಗ್ಯಾಲರಿಗೆ ಬಹುಭಾಷಾ ಕಲಾವಿದ ಪ್ರಕಾಶ್ ರಾಜ್ರವರು ಭೇಟಿ ನೀಡಿ, ಪುಸ್ತಕ ಸಂಗ್ರಹಗಳನ್ನು ಕುತೂಹಲದಿಂದ ವೀಕ್ಷಿಸಿದರು.
ಇಂದಿನ ಯುವ ಪೀಳಿಗೆಗೆ ಓದುವ ಸಂಸ್ಕೃತಿಯನ್ನು ಬೆಳೆಸಬೇಕು. ಮೊಬೈಲ್ ಘೀಳಿನಿಂದ ಹೊರಬಂದು ಪುಸ್ತಕ ಪ್ರೀತಿಯನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಈ ಪುಸ್ತಕ ಗ್ಯಾಲರಿ ಅನುರೂಪವಾದ ವೇದಿಕೆಯಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಡಯಾನ ಬುಕ್ ಗ್ಯಾಲರಿಯ ಮಾಲೀಕರಾದ ಕೆ. ಎಲ್. ಈಶ್ವರ್, ಡಯಾನ ಸ್ಪೋರ್ಟ್ಸ್ ಅಂಡ್ ಟಾಯ್ಸ್ನ ಪಾಲುದಾರಾದ ಪೃಥ್ವಿನ್, ಸಿಬ್ಬಂದಿ ವರ್ಗ, ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು.