ಬೆಂಗಳೂರು: ಶಾಲೆಯಲ್ಲಿ ಕಲಿಯುವ ಮಕ್ಕಳು ಅತಿಹೆಚ್ಚು ಅಂಕಪಡೆದು ಸಾಧನೆ ಮಾಡಿದರೇ ತಂದೆ ತಾಯಿಗೆ ಎಲ್ಲಿಲ್ಲದ ಸಂಭ್ರಮ. ಅಂತೆಯೇ ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ ತನ್ನ ಪುತ್ರನಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಹುಮಾನ ವಿತರಿಸಿ ಸಂತಸಪಟ್ಟಿದ್ದಾರೆ.
ಬೆಂಗಳೂರಿನ ಬಿಷಪ್ ಕಾಟನ್ ಬಾಯ್ ಸ್ಕೂಲ್ನಲ್ಲಿ ಐಸಿಎಸ್ಸಿ ಹತ್ತನೇ ತರಗತಿಯಲ್ಲಿ ಮಧು ಬಂಗಾರಪ್ಪ ಅವರ ಮಗ ಸೂರ್ಯ ಅವರು ಶೇ.98.6ಅಂಕ ಪಡೆದು ಶಾಲೆಗೆ ಎರಡನೇ ರಾಂಕ್ ಪಡೆದಿದ್ದಾರೆ.
ಗುರುವಾರ ನಡೆದ ಸಾಧಕ ಮಕ್ಕಳಿಗೆ ವಾರ್ಷಿಕ ಗೌರವ ಸಮರ್ಪಣೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ಮಗ ಸೂರ್ಯ ಸೇರಿದಂತೆ ರ್ಯಾಂಕ್ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಖುಷಿ ಪಟ್ಟರು.
ಅಪ್ಪನಾಗಿ ಸೂರ್ಯನಿಗೆ ಬಹುಮಾನ ವಿತರಿಸುವ ಮತ್ತು ಆತನ ಸಾಧನೆ ಸಾಕ್ಷಿಯಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಂತೋಷವಾಯಿತು ಎಂದು ಸಚಿವ ಮಧುಬಂಗಾರಪ್ಪ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಸೂರ್ಯ ಮಧುಬಂಗಾರಪ್ಪ ಅವರ ತಾಯಿ ಅನಿತಾ ಮಧುಬಂಗಾರಪ್ಪ ಅವರೂ ಪಾಲ್ಗೊಂಡು ಮಗನ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ ಕಾರ್ಯಕ್ರಮದಲ್ಲಿದ್ದ ಸಂಸ್ಥೆ ಮುಖ್ಯಸ್ತರಾದರೆ ಸಾಮ್ಯುವಲ್ ಸೂರ್ಯನಿಗೆ ಶುಭಕೋರಿದರು.