ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಜನತಾ ದರ್ಶನ : ಜಿಲ್ಲೆಯಲ್ಲಿ 328 ಅರ್ಜಿ ಸ್ವೀಕಾರ

ಶಿವಮೊಗ್ಗ : ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಇವರ ಅಧ್ಯಕ್ಷತೆಯಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಒಟ್ಟು 328 ಅಹವಾಲುಗಳನ್ನು ಜನರಿಂದ ಸ್ವೀಕರಿಸಲಾಗಿದೆ.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅತ್ಯಧಿಕ 126 ಅಹವಾಲು ಸ್ವೀಕರಿಸಲಾಗಿದೆ. ನಂತರ ಸ್ಥಾನದಲ್ಲಿ ಜಿಲ್ಲಾ ಪಂಚಾಯತ್‍ಗೆ ಸಂಬಂಧಿಸಿದಂತೆ 38 ಅರ್ಜಿಗಳು ಬಂದಿವೆ. ಕಾರ್ಮಿಕ ಇಲಾಖೆಗೆ 02, ಸ್ಮಾರ್ಟ್‍ಸಿಟಿಗೆ 02, ಅಬಕಾರಿ ಇಲಾಖೆಗೆ 03, ಸಮಾಜ ಕಲ್ಯಾಣ ಇಲಾಖೆಗೆ 03, ಪಶುಪಾಲನಾ ಇಲಾಖೆಗೆ 03, ಕೆಎಸ್‍ಆರ್‍ಟಿಸಿಗೆ 08, ಆಹಾರ ಇಲಾಖೆಗೆ 08, ಮೆಸ್ಕಾಂ ಗೆ 10, ಪೊಲೀಸ್ ಇಲಾಖೆಗೆ 11, ಆರೋಗ್ಯ ಇಲಾಖೆಗೆ 14, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಸಂಬಂಧಿಸಿದ 19, ಮಹಾನಗರಪಾಲಿಕೆಗೆ 26, ಪ್ರೌಢಶಿಕ್ಷಣ ಇಲಾಖೆಗೆ 26, ಇತರೆ ಇಲಾಖೆಗಳಿಗೆ ಸಂಬಂಧಿಸಿದ 29 ಸೇರಿದಂತೆ ಒಟ್ಟು 328 ಅಹವಾಲು ಸ್ವೀಕರಿಸಲಾಗಿದ್ದು, ವಿಲೇವಾರಿ ಕಾರ್ಯ ಪ್ರಗತಿಯಲ್ಲಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ತಿಳಿಸಿದ್ದಾರೆ.

Related posts

ದಿನ ಬಿಟ್ಟು ದಿನ ವಾಹನ ನಿಲುಗಡೆಗೆ ಅಧಿಸೂಚನೆ

ಗುತ್ತಿಗೆದಾರರ ಶೇ.65ರಂದ 70 ರಷ್ಟು ಬಿಲ್ ಬಿಡುಗಡೆ ಸೂಚನೆ- ಡಿಸಿಎಂ ಡಿ.ಕೆ ಶಿವಕುಮಾರ್ .

ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣ: ಓರ್ವ ವ್ಯಕ್ತಿ ಪೊಲೀಸ್ ವಶಕ್ಕೆ