ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಶಕ್ತಿ ಯೋಜನೆಗೆ ನಿರ್ವಾಹಕರು ಪಲಿಪಶು: 300 ಕಂಡಕ್ಟರ್ ಗಳು ಸಸ್ಪಂಡ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ  ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿಯೋಜನೆಯಡಿ ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಬೆಳೆಸುತ್ತಿದ್ದು ಇದನ್ನ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದರೆ ಈ ಶಕ್ತಿಯೋಜನೆಗೆ ಕಂಡಕ್ಟರ್ ಗಳು ಬಲಿಪಶುವಾಗುತ್ತಿದ್ದಾರೆ.

ಶಕ್ತಿ ಯೋಜನೆ ಅಡಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಉಚಿತ ಪ್ರಯಾಣ ಜಾರಿಯಾಗುತ್ತಿದ್ದಂತೆ ಸಭೆ, ಸಮಾರಂಭ ಮತ್ತು ಪುಣ್ಯಕ್ಷೇತ್ರಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಇದರಿಂದ ನಾಲ್ಕು ನಿಗಮಗಳಿಗೆ ಆದಾಯ ಹೆಚ್ಚಿದೆ.

ಕಳೆದ ಮೂರು ತಿಂಗಳಲ್ಲಿ ಕೆಎಸ್ಆರ್ಟಿಸಿ ಬಸ್ ಗಳಲ್ಲಿ 70,73,05,946 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 1648,51,39,030 ಆಗಿದೆ. ನಿಗಮಗಳಿಗೆ ಆದಾಯವೇನೋ ಹೆಚ್ಚಿದೆ ಆದರೆ ನಿರ್ವಾಹಕರಿಗೆ ತಲೆಬಿಸಿ ಶುರುವಾಗಿದೆ.

ಹೌದು ಶಕ್ತಿ ಯೋಜನೆ ಜಾರಿಯದ ಬಳಿಕ ಮಹಿಳಾ ಪ್ರಯಾಣಿಕರ ಎಡವಟ್ಟಿನಿಂದ ಮತ್ತು ನಿರ್ವಾಹಕರ ಸ್ವಯಂಕೃತ ತಪ್ಪಿನಿಂದ ರಾಜ್ಯದಲ್ಲಿ ಇದುವರೆಗೂ ನಾಲ್ಕೂ ನಿಗಮ ಸೇರಿ ಒಟ್ಟು 300 ಕ್ಕೂ ಅಧಿಕ ಮಂದಿ ನಿರ್ವಾಹಕರನ್ನು ಸಾರಿಗೆ ಇಲಾಖೆ ಸಸ್ಪೆಂಡ್ ಮಾಡಿದೆ

 

ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದರೂ, ಮಹಿಳೆಯರು ಟಿಕೆಟ್ ಪಡೆದೇ ಪ್ರಯಾಣಿಸಬೇಕು. ನಿರ್ವಾಹಕ ಮಹಿಳೆಯರಿಗೆ ಅವರು ಪ್ರಯಾಣಿಸುವ ಮಾರ್ಗದ ಟಿಕೆಟ್ ನೀಡುತ್ತಾರೆ. ಆದರೆ ಮಹಿಳೆ ತಾನು ಹೋಗಬೇಕಾದ ಸ್ಥಳವನ್ನು ತಲುಪದೆ ಮಾರ್ಗ ಮಧ್ಯೆ ಇಳಿದರೆ, ನಿರ್ವಾಹಕನನ್ನು ಸಂಕಷ್ಟಕ್ಕೆ  ಸಿಲುಕಿಸುತ್ತದೆ. ಉದಾ: ಒಬ್ಬ ಮಹಿಳೆ ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ ಬಸ್ ಹತ್ತಿ ಹುಬ್ಬಳ್ಳಿಗೆ ಟಿಕೆಟ್ ಪಡೆಯುತ್ತಾಳೆ. ಮಾರ್ಗ ಮಧ್ಯೆ ಮಹಿಳೆ ದಾವಣಗೆರೆಯಲ್ಲಿ ಇಳಿಯುತ್ತಾಳೆ.

ನಂತರ ಟಿಕೆಟ್ ಕಲೆಕ್ಟರ್ ಪರಿಶೀಲನೆಗೆ ಬಂದಾಗ ಮಹಿಳಾ ಪ್ರಯಾಣಿಕ ಇರುವುದಿಲ್ಲ. ಇದರಿಂದ ಅನುಮಾನಗೊಂಡ ಕಲೆಕ್ಟರ್ ನಿರ್ವಾಹಕನಿಗೆ “ನೀನು ಇಲಾಖೆಗೆ ಸುಳ್ಳು ಮಾಹಿತಿ ನೀಡುತ್ತಿದ್ದೀಯಾ” ಎಂದು ಇಲಾಖೆಗೆ ವಿಷಯ ತಿಳಿಸುತ್ತಾರೆ. ಆಗ ಮೇಲಾಧಿಕಾರಿಗಳು ನಿರ್ವಾಹಕನನ್ನು ಸಸ್ಪೆಂಡ್ ಮಾಡುತ್ತಾರೆ.

ಈ ಕಾರಣದಿಂದ ಹೀಗೆ ರಾಜ್ಯಾದ್ಯಂತ ಸಾರಿಗೆ ಇಲಾಖೆ 300ಕ್ಕೂ ಹೆಚ್ಚು ನಿರ್ವಾಹಕರನ್ನು ಸಸ್ಪೆಂಡ್ ಮಾಡಿದೆ. ಇನ್ನು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿರುವುದಾಗಿ ಆರೋಪಿಸಿ ರಾಜ್ಯ ಸರ್ಕಾರ, ಸಾರಿಗೆ ಇಲಾಖೆಗೆ ಒಂದು ತಿಂಗಳ ಹಿಂದೇ ನೋಟಿಸ್ ನೀಡಿದೆ.

ಉಡುಪಿಯಲ್ಲಿ ಇದೇ ರೀತಿಯಾದ ಒಂದು ಘಟನೆ ನಡೆದಿದೆ. ಶಿರಸಿಯಿಂದ ಉಡುಪಿಗೆ ಟಿಕೆಟ್ ಪಡೆದು ಮಹಿಳೆ ಹೊರಟಿದ್ದಳು. ಆದರೆ ಮಹಿಳೆ ಭಟ್ಕಳದಲ್ಲೇ ಇಳಿದು ಧರ್ಮಸ್ಥಳದ ಬಸ್ ಹಿಡಿದಿದ್ದರು. ಈ ಬಗ್ಗೆ ನಿರ್ವಾಹಕನಿಗೆ ಕುಂದಾಪುರದಲ್ಲಿ ಗಮನಕ್ಕೆ ಬಂದಿದೆ. ಆಗ ನಿರ್ವಾಹಕ ಧರ್ಮಸ್ಥಳ ಬಸ್ ನಿರ್ವಾಹಕನ ಸಂಪರ್ಕ ಸಾಧಿಸಿ ಮಹಿಳೆಯನ್ನು ಉಡುಪಿಯಲ್ಲಿ ತಡೆದಿದ್ದಾರೆ. ನಂತರ ನಿರ್ವಾಹಕರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಸರ್ಕಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಿರ್ವಾಹಕರು ಆಗ್ರಹಿಸಿದ್ದಾರೆ.

 

Related posts

ರಾಷ್ಟ್ರೀಯ ಹೆದ್ದಾರಿಯನ್ನು ನಗರದ ನವುಲೆ ಬಳಿ ವಿಸ್ತರಿಸಬೇಕು-ಸಚಿವ ಮಧುಬಂಗಾರಪ್ಪಗೆ ಮನವಿ

ಸರ್ಕಾರಿ ನೌಕರರನ್ನು 90 ದಿನಗಳಿಗಿಂತ ಹೆಚ್ಚು `ಅಮಾನತು’ಗೊಳಿಸುವಂತಿಲ್ಲ : ಸುಪ್ರೀಂ ಕೋರ್ಟ್

ಗರ್ಭಿಣಿಯರಿಗೆ ಸೀಮಂತ, ಮಡಿಲು ತುಂಬುವ ಕಾರ್ಯಕ್ರಮ.