ಶಿವಮೊಗ್ಗ: ಶಿವಮೊಗ್ಗ ನಗರದ ಪ್ರಸಿದ್ಧ ಮುದ್ದು ಪ್ರಾಣಿಗಳ ಔಷಧ ಮತ್ತು ಆಹಾರಗಳ ಸಗಟು ಮಾರಾಟದಾರಾದ ಮಾನಸ ಪೆಟ್ಸ್ ಮಾರ್ಟ್, ಪೋಲೀಸ್ ಚೌಕಿ, ಶಿವಮೊಗ್ಗ ಇವರು ದಿನಾಂಕ ೧೫-೮-೨೦೨೩ ರಿಂದ ೧೦ ದಿನಗಳ ಕಾಲ ಪೆಟ್ ಮೇನಿಯಾ ಹೆಸರಿನಲ್ಲಿ ರಿಯಾಯಿತಿ ಮೇಳವನ್ನು ಏರ್ಪಡಿಸಿದೆ.
ಇದರ ಉದ್ಘಾಟನೆಯನ್ನು ಡಾ: ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತç ಮತ್ತು ವಿಷಶಾಸ್ತç ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರು ನೆರವೇರಿಸಿ, ಶ್ರೀ ಗಜಾನನ ಹೆಗಡೆಯವರ ಈ ಕಾರ್ಯ ಶ್ಲಾಘನೀಯ ಮತ್ತು ಮುದ್ದು ಪ್ರಾಣಿಗಳ ಮಾಲಕರು ಈ ಮೇಳದ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮಾನಸ ಪೆಟ್ಸ್ ಮಾರ್ಟ್ ಮಾಲಕರಾದ ಶ್ರೀ ಗಜಾನನ ಹೆಗಡೆ ಇವರು ಈ ೧೦ ದಿನಗಳಲ್ಲಿ ಮುದ್ದು ಪ್ರಾಣಿಗಳ ಮಾಲಕರಿಗೆ ಅವುಗಳ ಆಹಾರ, ಮತ್ತು ಪರಿಕರಗಳ ಮೇಲೆ ಶೇ ೨೦-೪೦ % ರಿಯಾಯಿತಿ ದರದಲ್ಲಿ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಗೌತಮ್ ನಾಯಕ್, ಉಧ್ಯಮಿಗಳು ಮತ್ತು ನಿರ್ದೇಶಕರು, ಶಿವಮೊಗ್ಗ ಕೆನ್ನೆಲ್ ಕ್ಲಬ್ ಮತ್ತು ಇತರರು ಭಾಗವಹಿಸಿ ಶುಭ ಕೋರಿದರು.